ಸಚಿವ ಅಶ್ವಥ್ ನಾರಾಯಣ್ ರನ್ನು ಭೇಟಿಯಾದ ಎಸ್ ಐ ಓ ನಿಯೋಗ: ಎನ್ ಇ ಪಿ ಬಗ್ಗೆ ಠರಾವು ಅರ್ಪಣೆ. ಎಸ್ ಐ ಓ ರಾಜ್ಯ ಘಟಕದ ನಿಯೋಗವು ಉನ್ನತ ಶಿಕ್ಷಣ ಸಚಿವರಾದ ಡಾ ಅಶ್ವಥ್ ನಾರಾಯಣ್ ಅವರನ್ನು ಭೇಟಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ವಿವಿಧ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಿತು. ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಕ್ಕೆ ರಾಜ್ಯ ಸರಕಾರ ಹೊರಟಿದ್ದು ಈ ಬಗ್ಗೆ ತನ್ನ ನಿಲುವನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಎಸ್ ಐ ಓ ತನ್ನ ಭಿನ್ನಮತಗಳನ್ನು ವ್ಯಕ್ತಪಡಿಸಿದ್ದು ಅವುಗಳನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ದುಂಡುಮೇಜಿನ ಸಭೆ ನಡೆಸಲಾಗಿದ್ದು ಅದರಲ್ಲಿ ಅಂಗೀಕರಿಸಲಾದ ಠರಾವಿನ ಪ್ರತಿಯನ್ನು ಶಿಕ್ಷಣ ಸಚಿವರಿಗೆ ನೀಡುವ ಮೂಲಕ ಈ ಬಗ್ಗೆ ಗಮನಹರಿಸುವಂತೆ ಮತ್ತು NEPಯನ್ನು ಜಾರಿಗೊಳಿಸುವ ಮೊದಲು ಸೂಕ್ತ ಬದಲಾವಣೆಗಳನ್ನು ತರುವಂತೆ ಸಚಿವರಲ್ಲಿ ವಿನಂತಿಸಿತು. ಈ ಸಂದರ್ಭದಲ್ಲಿ ಎಸ್.ಐ.ಓ ರಾಜ್ಯ ಕಾರ್ಯದರ್ಶಿಗಳಾದ ಆಸಿಮ್ ಜವಾದ್, ಮಹಮ್ಮದ್ ಪೀರ್ ಲಟಗೇರಿ ಮತ್ತು ನಾಸಿರ್ ಹೂಡೆ ಉಪಸ್ಥಿತರಿದ್ದರು.
Recent Posts
- Text books must reflect constitutional ideals not impose ideological blinkers: SIO Karnataka
- Karnataka budget misses out on key aspects and fails to fulfil urgent needs
- ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಿ ಶೀಘ್ರದಲ್ಲಿಯೇ ಈಡೇರಿಸುವಂತೆ ಎಸ್.ಐ.ಓ ಕರ್ನಾಟಕ ಒತ್ತಾಯ.
- ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಶೀಘ್ರ ಪ್ರಕಟ ಮಾಡುವಂತೆ ಎಸ್.ಐ.ಓ ಕಲಬುರಗಿ ಆಗ್ರಹ.
- KSLU ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನ ವಿದ್ಯಾರ್ಥಿಗಳ ಪರೀಕ್ಷಾ ಗೊಂದಲವನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಎಸ್.ಐ.ಓ ಕರ್ನಾಟಕ ಆಗ್ರಹ.
Recent Comments
No comments to show.