ಸ್ವಾತಂತ್ರ ಹೋರಾಟದಲ್ಲಿ ಬ್ಯಾರಿಗಳ ಪಾತ್ರ – ವಿಚಾರಗೋಷ್ಠಿ

ಮೇಲ್ತೆನೆ-ಎಸ್‌ಐಒ ವತಿಯಿಂದ ವಿಚಾರಗೋಷ್ಠಿ

ಮಂಗಳೂರು, ಆ.14: ಕರಾವಳಿಯ ಬ್ಯಾರಿ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿ ಸ್ವಾತಂತ್ರ ಹೋರಾಟಗಳಲ್ಲಿ ಪಾತ್ರ ವಹಿಸಿದ್ದರೂ ಕೂಡ ಕೆಲವು ಕಾರಣದಿಂದ ಅವರು ಚರಿತ್ರೆಯ ಪುಟಗಳಲ್ಲಿ ದಾಖಲೆಯಾಗಲಿಲ್ಲ ಎಂದು ಯುವ ಲೇಖಕ ಇಸ್ಮತ್ ಪಜೀರ್ ಅಭಿಪ್ರಾಯಪಟ್ಟಿದ್ದಾರೆ.

ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ-ಮೇಲ್ತೆನೆ ಹಾಗೂ ಎಸ್‌ಐಒ ಉಳ್ಳಾಲ ಘಟಕದ ವತಿಯಿಂದ ತೊಕ್ಕೊಟ್ಟಿನ ಕಾರುಣ್ಯ ಸದನದಲ್ಲಿ ಬುಧವಾರ ನಡೆದ ‘ಸ್ವಾತಂತ್ರ ಹೊರಾಟದಲ್ಲಿ ಬ್ಯಾರಿಗಳ ಪಾತ್ರ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.

ಇಂದು ಹೆಜ್ಜೆ ಹೆಜ್ಜೆಗೂ ಮುಸ್ಲಿಮರು ತನ್ನ ದೇಶ ನಿಷ್ಠೆ ಸಾಬೀತುಪಡಿಸಬೇಕಾದ ಕೇಡುಗಾಲದಲ್ಲಿ ಬದುಕುತ್ತಿದ್ದಾರೆ. ಯಾರು ದೇಶದ ವಿಮೋಚನೆಗಾಗಿ ಸೊತ್ತು, ವಿತ್ತ ಮತ್ತು ಪ್ರಾಣವನ್ನು ಅರ್ಪಿಸಿದರೋ ಅವರ ಕೊಡುಗೆಗಳನ್ನು ಶೂನ್ಯವೆಂದೂ, ಯಾರು ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಬಗೆದರೋ ಅವರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರರಾಗಿ ಚಿತ್ರಿಸಲ್ಪಡುತ್ತಿದ್ದಾರೆ. ಕರಾವಳಿಯ ಮುಸ್ಲಿಮರ ಪೈಕಿ ಅನೇಕ ಮಂದಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ಜೈಲಿಗೆ ಕಳುಹಿಸಿದವರನ್ನು ಮಾತ್ರ ಇತಿಹಾಸದ ಪುಟಗಳಲ್ಲಿ ದಾಖಲಿಸಲಾಗಿದೆ. ಹಾಗಾಗಿ ಅನೇಕ ಬ್ಯಾರಿ ಮುಸ್ಲಿಂ ಸ್ವಾತಂತ್ರ ಹೋರಾಟಗಾರರು ಆ ಪುಟಗಳಲ್ಲಿ ದಾಖಲೆಯಾಗದೆ ವಂಚಿತರಾದರು ಎಂದು ಇಸ್ಮತ್ ನುಡಿದರು.

ಮುಸ್ಲಿಮರಿಗೆ ಸ್ವಾತಂತ್ರ್ಯ ಸಂಗ್ರಾಮವೆಂಬುದು ಧಾರ್ಮಿಕ ಬಾಧ್ಯತೆಯೂ ಆಗಿತ್ತು. ಆ ನಿಟ್ಟಿನಲ್ಲಿ ದೇಶದ ಇತರ ಭಾಗಗಳ ಮುಸ್ಲಿಮರು ಹೇಗೆ ಹೋರಾಡಿದರೋ ಹಾಗೆಯೇ ಕರಾವಳಿ ಕರ್ನಾಟಕದ ಬ್ಯಾರಿ ಮುಸ್ಲಿಮರೂ ಬ್ರಿಟಿಷ್ ವಸಾಹತು ಶಾಹಿಯ ವಿರುದ್ಧ ಹೋರಾಡಿದ್ದರು. ಜಿಲ್ಲೆಯ ಬ್ಯಾರಿ ಮುಸ್ಲಿಮರ ಧಾರ್ಮಿಕ ವಿಚಾರದಲ್ಲಿ ಮಲಬಾರ್ ಪ್ರದೇಶದ ಧಾರ್ಮಿಕ ವಿದ್ವಾಂಸರ ಪ್ರಭಾವ ಅಂದೂ ಇಂದಿನಂತೆಯೇ ದಟ್ಟವಾಗಿತ್ತು. ಕೇರಳದ ಪ್ರಮುಖ ಉಲಮಾ ನಾಯಕ ವೆಲಿಯಂಗೋಡು ಉಮರ್ ಖಾಝಿ ಅಂದು ಬ್ರಿಟಿಷರ ವಿರುದ್ಧ ಜಿಹಾದ್‌ಗೆ ನೀಡಿದ ಫತ್ವಾವನ್ನು ಅನುಸರಿಸಿ ಮಂಗಳೂರು ಸುತ್ತಮುತ್ತಲಿನ ಬ್ಯಾರಿ ಮುಸ್ಲಿಮರು ಬ್ರಿಟಿಷ್ ಸಾಮ್ರಾಜ್ಯ ಶಾಹಿಯ ವಿರುದ್ಧ ಹೋರಾಡಿದ್ದರು ಎಂದು ಇಸ್ಮತ್ ಹೇಳಿದರು.

ಉಳ್ಳಾಲ ಮದನಿ ಪಿಯು ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ವಿಷಯ ಮಂಡಿಸಿ ಸ್ವಾತಂತ್ರ ಹೋರಾಟದಲ್ಲಿ ದೇಶಾದ್ಯಂತ ಸಾಕಷ್ಟು ಸಂಖ್ಯೆಯ ಮುಸ್ಲಿಮರು ಪಾಲ್ಗೊಂಡಿದ್ದಾರೆ. ಆ ಪೈಕಿ ಕರಾವಳಿಯ ಅದರಲ್ಲೂ ಗ್ರಾಮಾಂತರ ಪ್ರದೇಶದ ಬ್ಯಾರಿ ಮುಸ್ಲಿಮರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ವಿಚಾರ. ಇತಿಹಾಸ ಪುಟಗಳಲ್ಲಿ ದಾಖಲೆಯಾಗದಿರುವ ಮೂಲಕ ಆದ ಅನ್ಯಾಯವನ್ನು ಇನ್ನಾದರು ಅಧ್ಯಯನ ನಡೆಸಿ ಯುವ ಪೀಳಿಗೆಗೆ ತಿಳಿಸಿಕೊಡುವ ಕೆಲಸ ಆಗಬೇಕಿದೆ. ಇಲ್ಲದಿದ್ದರೆ ಬ್ಯಾರಿ ಹಿರಿಯರ ಹೋರಾಟಕ್ಕೆ ನಾವು ಅಪಚಾರ ಎಸಗಿದಂತಾಗುತ್ತದೆ ಎಂದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಕ್ಷ ಹಂಝ ಮಲಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಮಾಅತೆ ಇಸ್ಲಾಮೀ ಹಿಂದ್‌ನ ಉಳ್ಳಾಲ ಘಟಕದ ಉಪಾಧ್ಯಕ್ಷ ಅಬ್ದುಲ್ ರಹೀಂ ಸಮಾರೋಪ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಹಮ್ಮದ್ ಬಾಷಾ ನಾಟೆಕಲ್, ಬಶೀರ್ ಕಲ್ಕಟ್ಟ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಐಒ ಕಾರ್ಯಕರ್ತ ಶಾಹಿಲ್ ಕಿರಾಅತ್ ಪಠಿಸಿದರು. ಎಸ್‌ಐಒ ಉಳ್ಳಾಲ ಘಟಕದ ಅಧ್ಯಕ್ಷ ನಿಝಾಮ್ ಉಳ್ಳಾಲ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮನಿಗೆ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಆಶಿರುದ್ದೀನ್ ಆಲಿಯಾ ಮಂಜನಾಡಿ ವಂದಿಸಿದರು.
ion slot
ion casino
asia toto
asiatoto slot
situs slot4d
togel online
idtribun
udinslot
asiatoto
tribun855
slot4d

People of Flood areas in North Karnataka need immediate help

May the people of Flood areas in especially North Karnataka and other areas recieve immediate help and aid from fellow brethren.

Let us extend our hands and help our fellow humans in this hour of need.
Scores of houses have been water logged, people have been forced to evacuate thier homes and villages and take shelter in relief camps or their relatives homes.
Some ways in which we can contribute and help :
1) Contribute generously to HRS fund and other recognised relief bodies
2) If you are nearby the flood affected areas, join in to rescue operations according to your capability
3) Visit local relief camps if set up and ensure availability of hygienic food
4) Ensure necessary medical camps are set up for the affected people
5) Conduct mass fund collection drive in religious centers such as Temples, Mosques, Churches and other community centers
6) Pray for the affected families that their pain and sorrows are mellowed down.
7) In long term, carry a post analysis of erratic climatic conditions of erratic floods and droughts.
ion slot
ion casino
asia toto
asiatoto slot
situs slot4d
togel online
idtribun
udinslot
asiatoto
tribun855
slot4d

ಎಸ್ ಐ ಓ ದಿಂದ ‘ಗ್ರೀನ್ ಫೂಟ್ ಪ್ರಿಂಟ್ಸ್’ ಪರಿಸರ ಸಂರಕ್ಷಣಾ ಅಭಿಯಾನಕ್ಕೆ ಚಾಲನೆ

ಮಂಗಳೂರು: ಭವಿಷ್ಯದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವು ನಮಗೆ ಅನುಕೂಲವಾಗಿರಬೇಕಾದಲ್ಲಿ ಪ್ರಕೃತಿ ಸಂರಕ್ಷಣೆಯ ಜಾಗೃತಿಯು ಮಕ್ಕಳಿಗೆ ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ನ್ಯಾಷನಲ್ ಎನ್ವಿರಾನ್ಮೆಂಟ್ ಕೇರ್ ಫೆಡರೇಶನ್ ನ ರಾಜ್ಯ ಕಾರ್ಯದರ್ಶಿ, ಸಾಮಾಜಿಕ ಕಾರ್ಯಕರ್ತ ಶಶಿಧರ್ ಶೆಟ್ಟಿ ಅಭಿಪ್ರಾಯಿಸಿದರು.

ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಮಂಗಳೂರು ಶಾಖೆಯ ವತಿಯಿಂದ ನಗರದ ಹಿದಾಯತ್ ಸೆಂಟರ್ ನ ಸಭಾಂಗಣದಲ್ಲಿ ‘ಗ್ರೀನ್ ಫೂಟ್ ಪ್ರಿಂಟ್ಸ್(ಸ್ಟಾರ್ಟ್ ಮೇಕ್ ಎ ಡಿಫರೆನ್ಸ್) ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಸಿದ ಪರಿಸರ ಸಂರಕ್ಷಣಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಹೆಚ್ಚುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ವರ್ಷಕ್ಕೊಂದಾದರೂ ಗಿಡ ನೆಡುವ ಅಭ್ಯಾಸ ಇರಬೇಕು. ಆ ಮೂಲಕ ಪ್ರಕೃತಿಯ ಜೊತೆಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು.
ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಂಡು, ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು.
ಈ ಮೂಲಕ ನಾವು ಸುಸ್ಥಿರ ಭಾರತವನ್ನು ಕಟ್ಟುವವರಾಗಬೇಕು. ಪರಿಸರವನ್ನು ಹಾಳು ಮಾಡುವ ಬೃಹತ್ ಕಂಪನಿಗಳ ವಿರುದ್ಧ ಎದೆಗುಂದದೆ ನಿರಂತರ ಹೋರಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪರಿಸರ ರಕ್ಷಣಾ ಅಭಿಯಾನದ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ.ಎಂ. ಅಶ್ರಫ್, ಎಸ್ ಐ ಓ ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ, ಮಂಗಳೂರು ನಗರಾಧ್ಯಕ್ಷ ಇರ್ಷಾದ್ ವೇಣೂರು ಉಪಸ್ಥಿತರಿದ್ದು, ಮಾತನಾಡಿದರು.

ಪರಿಸರ ಅಭಿಯಾನದ ಸಂಚಾಲಕ ಅಮ್ಮಾರ್ ಅಹ್ಸನ್ ಸ್ವಾಗತಿಸಿದರು. ರುಮಾನ್ ಕುದ್ರೋಳಿ ಕಿರಾಅತ್ ಪಠಿಸಿದರು. ಎಸ್ ಐ ಓ ಕಾರ್ಯಕರ್ತ ರಾಹಿಲ್ ಕುದ್ರೋಳಿ ನಿರೂಪಿಸಿದರು.

ಗುಲ್ಬರ್ಗಾ ಮತ್ತು ಹುಬ್ಬಳ್ಳಿಯಲ್ಲಿ ಅರ್ಜಿದಾರ ಶಿಬಿರ

ಬೆಂಗಳೂರು: ಎಸ್.ಐ.ಓ ಕರ್ನಾಟಕದ ವತಿಯಿಂದ ಎರಡು ದಿನಗಳ ಅರ್ಜಿದಾರ ಸದಸ್ಯರಿಗಾಗಿ ಅರ್ಜಿದಾರ ಸದಸ್ಯರ ಶಿಬಿರವನ್ನು ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಹಲವಾರು ವಿಚಾರಗಳನ್ನು ಹಂಚಿಕೊಂಡರು.

ಅರ್ಜಿದಾರ ಸದಸ್ಯರ ಶಿಬಿರ

ತೀರ್ಥಹಳ್ಳಿ: ಎಸ್.ಐ.ಓ ಕರ್ನಾಟಕ ರಾಜ್ಯ ದ ವತಿಯಿಂದ ಅರ್ಜಿದಾರ ಸದಸ್ಯರಿಗೆ ದ್ವಿದಿನ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಶಿಬಿರಲ್ಲಿ ರಾಜ್ಯದ ದಕ್ಷಿಣ ವಿಭಾಗದಿಂದ ಅಬ್ಯರ್ಥಿಗಳು ಪಾಲ್ಘೊಂಡರು. ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಶ್ರೈಕ್ಷಣಿಕ, ಆರೋಗ್ಯ, ಸಂಘಟನೆಯ ಕಾರ್ಯ ಚಟುವಟಿಕೆಗಳು ಮತ್ತು ಸಾಮಾಜಿಕ ಜಾಲತಾಣದ ವಿಚಾರದಲ್ಲಿ ಮಾತನಾಡಿದರು.