ಸಚಿವ ಅಶ್ವಥ್ ನಾರಾಯಣ್ ರನ್ನು ಭೇಟಿಯಾದ ಎಸ್ ಐ ಓ ನಿಯೋಗ: ಎನ್ ಇ ಪಿ ಬಗ್ಗೆ ಠರಾವು ಅರ್ಪಣೆ. ಎಸ್ ಐ ಓ ರಾಜ್ಯ ಘಟಕದ ನಿಯೋಗವು ಉನ್ನತ ಶಿಕ್ಷಣ ಸಚಿವರಾದ ಡಾ ಅಶ್ವಥ್ ನಾರಾಯಣ್ ಅವರನ್ನು ಭೇಟಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ವಿವಿಧ ವಿಷಯದ ಕುರಿತು ವಿಸ್ತೃತ ಚರ್ಚೆ ನಡೆಸಿತು. ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಕ್ಕೆ ರಾಜ್ಯ ಸರಕಾರ ಹೊರಟಿದ್ದು ಈ ಬಗ್ಗೆ ತನ್ನ ನಿಲುವನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು. ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಎಸ್ ಐ ಓ ತನ್ನ ಭಿನ್ನಮತಗಳನ್ನು ವ್ಯಕ್ತಪಡಿಸಿದ್ದು ಅವುಗಳನ್ನು ಸಚಿವರೊಂದಿಗೆ ನಿಯೋಗ ಹಂಚಿಕೊಂಡಿತು. ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಂತೆ ಇತ್ತೀಚೆಗೆ ಬೆಂಗಳೂರಿನಲ್ಲಿ ದುಂಡುಮೇಜಿನ ಸಭೆ ನಡೆಸಲಾಗಿದ್ದು ಅದರಲ್ಲಿ ಅಂಗೀಕರಿಸಲಾದ ಠರಾವಿನ ಪ್ರತಿಯನ್ನು ಶಿಕ್ಷಣ ಸಚಿವರಿಗೆ ನೀಡುವ ಮೂಲಕ ಈ ಬಗ್ಗೆ ಗಮನಹರಿಸುವಂತೆ ಮತ್ತು NEPಯನ್ನು ಜಾರಿಗೊಳಿಸುವ ಮೊದಲು ಸೂಕ್ತ ಬದಲಾವಣೆಗಳನ್ನು ತರುವಂತೆ ಸಚಿವರಲ್ಲಿ ವಿನಂತಿಸಿತು. ಈ ಸಂದರ್ಭದಲ್ಲಿ ಎಸ್.ಐ.ಓ ರಾಜ್ಯ ಕಾರ್ಯದರ್ಶಿಗಳಾದ ಆಸಿಮ್ ಜವಾದ್, ಮಹಮ್ಮದ್ ಪೀರ್ ಲಟಗೇರಿ ಮತ್ತು ನಾಸಿರ್ ಹೂಡೆ ಉಪಸ್ಥಿತರಿದ್ದರು.
Press Release
Condemn brutality on students: SIO Karnataka
NEP 2020 has been rushed through and it’s implementation without due deliberations with stakeholders is against democratic spirit.
Genuine concerns have been raised with respect to NEP 2020. These concerns must be heard and suggestions considered. Police brutality on the students protesting against NEP 2020, in Bengaluru is condemnable. SIO Karnataka calls for immediate release of all those arrested and call upon government to initiate dialogue with all stakeholders, consider their inputs and accomodate them with regards to NEP 2020.
Mohammed Peer Latageri
State Secretary, SIO Karnataka
Bengaluru
Date: 15-Sep’21
ಯುನಾನಿ ಮತ್ತು ಆಯುರ್ವೇದ ಸ್ನಾತಕೋತ್ತರ ಪರೀಕ್ಷೆ ಮುಂದೂಡಲು ಎಸ್.ಐ.ಓ ಆಗ್ರಹ
ಪತ್ರಿಕಾ ಪ್ರಕಟಣೆಗಾಗಿ
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ ಇದರ ಪರಿಕ್ಷಾ ವಿಭಾಗವು ಅಕ್ಟೋಬರ್ 20 ರಂದು ಆಯುಷ್’ನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ನಡೆಸುವುದಾಗಿ ದಿನಾಂಕ 28/09/2020 ರಂದು ಪ್ರಕಟನೆ ಹೊರಡಿಸಿದೆ.ತರಾತುರಿಯಲ್ಲಿ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಬಾರದು. ಆ ಕಾರಣಕ್ಕಾಗಿ ಯುನಾನಿ ಮತ್ತು ಆಯುರ್ವೇದ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಂದೂಡಬೇಕಾಗಿ ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.
ಕೊರೋನಾ ರೋಗದ ಸಂಧಿಗ್ದ ಪರಿಸ್ಥಿತಿಯಲ್ಲಿ ಯುನಾನಿ ಮತ್ತು ಆಯುರ್ವೇದದ ಹಲವು ವಿದ್ಯಾರ್ಥಿಗಳು ತರಬೇತಿ ಪಡೆದು ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದರು ಹಾಗೂ ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ವಯಂ ಸೇವಕರಾಗಿ ಅಂತಿಮ ವರ್ಷದ ಯುನಾನಿ ಮತ್ತು ಆಯುವೇರ್ದದ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಂಡಿದ್ದರು.
ಆ ಸಮಯದಲ್ಲಿ ವಿಧ್ಯಾಭ್ಯಾಸ ನಡೆಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗದ ಕಾರಣ ವಿಶ್ವವಿದ್ಯಾಲಯವು ಏಕಾಏಕಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದ್ದು ಈಗಾಗಲೇ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಮುಂದೂಡಲು ಮನವಿ ಮಾಡಿಕೊಂಡಿದ್ದು, ಸರಕಾರ ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.
ಈಗಾಗಲೇ ಹೋಮಿಯೋಪತಿಯ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಲಾಗಿದ್ದು ಅದರಂತೆ ಯುನಾನಿ ಮತ್ತು ಆಯುರ್ವೇದ ವಿದ್ಯಾರ್ಥಿಗಳ ಸ್ನಾತಕೋತ್ತರ ಪರೀಕ್ಷೆಯನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಸಮಯಾವಕಾಶ ಮಾಡಿಕೊಡಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.
ವಿದ್ಯಾರ್ಥಿ ವೇತನ, ಅರಿವು ಸಾಲದ ಹಣ ದುರುಪಯೋಗದ ಆರೋಪ – ಎಸ್.ಐ.ಓ ನಿಂದ ಸೂಕ್ತ ತನಿಖೆಗೆ ಆಗ್ರಹ
ಪತ್ರಿಕಾ ಪ್ರಕಟಣೆಗಾಗಿ
ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನವನ್ನು ದುರುಪಯೋಗ ಮಾಡಿರುವ ಆರೋಪ ಕೇಳಿ ಬಂದಿದ್ದು ಸೂಕ್ತ ತನಿಖೆ ನಡೆಸಲು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.
ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸುಮಾರು 5.2 ಕೋಟಿ ಹಣವನ್ನು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ದುರುಪಯೋಗ ಮಾಡಿ ಬೇರಡೆ ವರ್ಗಾಯಿಸಿರುವ ಬಗ್ಗೆ ಗಂಭೀರ ಆರೋಪವಿದೆ. ಈಗಾಗಲೇ ವಿದ್ಯಾರ್ಥಿಗಳು 2019-20 ರ ಸಾಲಿನ ವಿದ್ಯಾರ್ಥಿ ವೇತನ ವಂಚಿತರಾಗಿದ್ದು ಈಗ ಕೇಳಿ ಬಂದಿರುವ ಆರೋಪವು ವಿದ್ಯಾರ್ಥಿಗಳೊಂದಿಗಿನ ದ್ರೋಹವಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಆರೋಪ ಸಾಬೀತಾದದಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ.
ಉನ್ನತ ವಿದ್ಯಾಭ್ಯಾಸಗಳಿಗೆ ಸಾಲ ಸೌಲಭ್ಯ ನೀಡುವ ‘ಅರಿವು-2’ ಯೋಜನೆಯ ಸುಮಾರು 50 ಕೋಟಿ ಹಣ ದುರುಪಯೋಗ ಮಾಡಿರುವ ಬಗ್ಗೆ ಆರೋಪವಿದ್ದು, ಈ ಬಗ್ಗೆ ಈಗಾಗಲೇ 2019 ರಲ್ಲಿ ಪ್ರಕರಣ ದಾಖಲಾಗಿದ್ದರೂ ಸೂಕ್ತ ತನಿಖೆಯಾಗಿಲ್ಲ. ಆದ್ದರಿಂದ ‘ಅರಿವು – 2’ ಸಾಲ ಯೋಜನೆಯ ಮೇಲಿನ ಆರೋಪದ ಮೇಲು ರಾಜ್ಯ ಸರಕಾರ ತನಿಖೆ ನಡೆಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸುತ್ತದೆ.
ಇತೀ ತಮ್ಮ ವಿಶ್ವಾಸಿ
ಮುಹಮ್ಮದ್ ಪೀರ್ ಲಟಗೇರಿ
(ಕ್ಯಾಂಪಸ್ ಕಾರ್ಯದರ್ಶಿ, ಎಸ್.ಐ.ಓ ಕರ್ನಾಟಕ)
ಕಥಾಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಉಪನ್ಯಾಸ ಕಾರ್ಯಕ್ರಮ
ಬೆಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಕರ್ನಾಟಕ ರಾಜ್ಯವು ಆಯೋಜಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 20ರಂದು ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರೂ ಹಾಗೂ ಖ್ಯಾತ ಬರಹಗಾರ್ತಿಯೂ ಆಗಿರುವ ಪ್ರೊ. ಮಾಲತಿ ಪಟ್ಟಣಶೆಟ್ಟಿ ರವರು ‘ಸ್ಟೋರಿ ರೈಟಿಂಗ್: ರೆಲ್ಮ್ ಆಫ್ ಇಮಾಜಿನೇಶನ್’ ಎಂಬ ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಎಸ್. ಐ. ಓ ಕರ್ನಾಟಕದ ರಾಜ್ಯಾಧ್ಯಕ್ಷರಾಗಿರುವ ಕಿಡಿಯೂರು ನಿಹಾಲ್ ಸಾಹೇಬ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಆನ್ಲೇನ್ನಲ್ಲಿ ನಡೆಯಲಿದ್ದು, ಝೂಮ್ ಆಪ್ಲಿಕೇಶನ್(ZOOM ID: 81086117690) ಮುಖಾಂತರ ಪಾಲ್ಗೊಲ್ಲಬಹುದು.
ಕಥಾಸ್ಪರ್ಧೆಯಲ್ಲಿ ಹಂಪಿ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಪ್ರಹ್ಲಾದ್ ಡಿ. ಎಂ ರವರ ಹೈನೋರ ಹೊಲ ಕಥೆಗೆ ಪ್ರಥಮ ಬಹುಮಾನ, ಮಂಗಳೂರಿನ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿ ಝಹರ್ ಫಾತಿಮಾರ ಚಾರ್ಡ್(ಇಂಗ್ಲೀಷ್) ಕಥೆಗೆ ದ್ವಿತೀಯ ಬಹುಮಾನ ಹಾಗೂ ಸರಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರಿನ ವಿದ್ಯಾರ್ಥಿನಿಯಾಗಿರುವ ಆನಮ್ ತಸ್ಮೀಯಾ ರವರ ತಾಹಿರಾಕೆ ಜಝ್ಬಾತ್(ಉರ್ದು) ಕಥೆಗೆ ತೃತೀಯ ಬಹುಮಾನ ಲಭಿಸಿರುತ್ತದೆ. ಪ್ರಥಮ ಬಹಮಾನವು 10000 ರೂಪಾಯಿ ನಗದು ಮತ್ತು ಪ್ರಮಾಣ ಪತ್ರ, ದ್ವಿತೀಯ ಬಹುಮಾನವು 7000 ರೂಪಾಯಿ ನಗದು ಮತ್ತು ಪ್ರಮಾಣ ಪತ್ರ ಹಾಗೂ ತೃತೀಯ ಬಹುಮಾನವು 5000 ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.