ಇಳಕಲ್ : ಎಸ್.ಐ.ಓ ವಿದ್ಯಾರ್ಥಿ ಸಂಘಟನೆ ಇಳಕಲ್ ಘಟಕದ ವತಿಯಿಂದ ನಗರ ಮಟ್ಟದ ಪ್ರೌಢಶಾಲೆ ಮತ್ತು ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇಳಕಲ್ ನಗರದ ಬಸ್ ಸ್ಟ್ಯಾಂಡ್ ರಸ್ತೆಯ ಇಬ್ರಾಹಿಂ ಮಸ್ಜಿದ್ ಹೊರಾಂಗಣದಲ್ಲಿ ದಿನಾಂಕ 30/08/2020 ರಂದು ಬೆಳಿಗ್ಗೆ 11.00 ಗಂಟೆಗೆ ನೆರವೇರಿಸಲಾಯಿತು.
ಸನ್ 2019-2020 ರ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ ಇಳಕಲ್ ನಗರದ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷಿಯ ಭಾಷಣವನ್ನು ಮಾಡಿದ ಮೊಹಮ್ಮದ್ ಫೀರ್ ಲಟಗೇರಿ ರವರು ಎಸ್.ಐ.ಓ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಮತ್ತು ಶಿಕ್ಷಣದಲ್ಲಿ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಹಾಗೂ ಉನ್ನತ ಶೈಕ್ಷಣಿಕ ವ್ಯಾಸಂಗಕ್ಕೆ ಪ್ರೋತ್ಸಾಹಿಸಲು ತನ್ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಗಣ್ಣ ಗದ್ದಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಇಳಕಲ್ ರವರು ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಎಸ್.ಐ.ಓ ಇಳಕಲ್ ಘಟಕದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ವಿದ್ಯಾರ್ಥಿ ಯುವಕರು ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಮತ್ತು ಯಾವುದೇ ವಿಷಯವನ್ನು ಪರೀಕ್ಷಿಸದೆ ಒಪ್ಪಿಕೊಳ್ಳಬಾರದು ಹಾಗೂ ವಿದ್ಯಾರ್ಥಿಗಳು ಸತತ ಪ್ರಯತ್ನದಿಂದ ತಮ್ಮ ಗುರಿಯನ್ನು ಸಾಧಿಸಿ ಸಾಮಾಜಕ್ಕೆ ಉತ್ತಮ ನಾಗರಿಕರಾಗಿ ವರ್ಗಾವಣೆಯಾಗಬೇಕು ಎಂದು ಕರೆಕೊಟ್ಟರು.
ಇನ್ನೋರ್ವ ಅತಿಥಿಯಾದ ಐಹೊಳ್ಳಿ ಸರ್ ರವರು ದೈಹಿಕ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ ಅಲಂಪೂರಪೇಟ ಇವರು ಮಾತನಾಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ಸಂಘಟನೆಯ ಪದಾಧಿಕಾರಿಗಳಿಗೆ ಶುಭ
ಹಾರೈಸಿದರು, ವಿದ್ಯಾರ್ಥಿಗಳು ಎಂದಿಗೂ ಅಂಕ ಗಳಿಸುವ ಯಂತ್ರವಾಗಬಾರದು ಪಠ್ಯಕ್ರಮವನ್ನು ಕೇವಲ ಹೆಚ್ಚಿನ ಅಂಕ ಗಳಿಸಲು ಮಾತ್ರ ಓದದೆ ಈ ಪಾಠಗಳಿಂದ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಜಾತಿ ಧರ್ಮದ ಸಂಕುಚಿತತೆ ಇರಬಾರದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬದುಕಬೇಕು ಎಂಬ ಸಂದೇಶ ನೀಡಿದರು.
ಉಳಿದಂತೆ ಮುಹಮ್ಮದ್ ಅಲಿ ಯತ್ನಟ್ಟಿ ನಿವೃತ್ತ ಶಿಕ್ಷಕರು ಅಂಜುಮನ್ ಸಂಸ್ಥೆ ಇವರು ಮಾತನಾಡಿ ಶಿಕ್ಷಣವು ಮನುಷ್ಯನ ಹುಟ್ಟಿದ ಉದ್ದೇಶವನ್ನು ಹಾಗೂ ಜೀವನದ ನಿಜ ವಾಸ್ತವಿಕತೆಯನ್ನು ಪರಿಚಯಿಸುವ ಮಾಧ್ಯಮವಾಗಿದೆ ಎಂದು ಭಾವಿಸಿದರು ಶಿಕ್ಷಣವು ಒಳಿತು – ಕೆಡುಕುಗಳ ವ್ಯತ್ಯಾಸವನ್ನು ಗುರುತಿಸುವ ಅತ್ಯುತ್ತಮ ವಿಧಾನವಾಗಿದೆ ಎಂದು ಹೇಳಿ ವಿದ್ಯಾರ್ಥಿಗಳ ಚಾರಿತ್ರಿಕ ನಿರ್ಮಾನವು ಉತ್ತಮ ಅಧ್ಯಯನದಿಂದ ಸಾಧ್ಯವಾಗುತ್ತದೆ ಎಂಬ ತಮ್ಮ ವಿಚಾರವನ್ನು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಹಮ್ಮದ್ ಫೀರ್ ಲಟಗೇರಿ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಎಸ್.ಐ.ಓ ಕರ್ನಾಟಕ ರವರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಐಹೊಳ್ಳಿ ಸರ್, ಸಂಗಣ್ಣ ಗದ್ದಿ, ಸಯೀದ್ ಅಹ್ಮದ್ ಕೊತ್ವಾಲ್, ಮುಹಮ್ಮದ್ ಅಲಿ ಯತ್ನಟ್ಟಿ, ಅಲ್ತಾಫ್ ಬಿಳೇಕುದರಿ, ಮುಬಷ್ಷಿರ್ ಶೇಕ್ ರವರು ವಹಿಸಿದ್ದರು ಹಾಗೂ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.